ಮಹಾಸಾದ್ವಿ ಹೆಳವನಕಟ್ಟೆ ಗಿರಿಯಮ್ಮ
Abstract
ನಮ್ಮ ಕನ್ನಡನಾಡು ಸಂಗೀತ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ಶಿವಶರಣೆಯರು ತಮ್ಮ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಿದ ಹಾಗೆ ಹರಿದಾಸರು ಕೂಡ ತಮ್ಮ ಸಾಹಿತ್ಯವನ್ನು ರಚನೆ ಮಾಡಿದ್ದಾರೆ. ದಾಸರು ವೈಯುಕ್ತಿಕವಾಗಿ ತಮ್ಮ ಮೋಕ್ಷದ ಸ್ವಾರ್ಥವನ್ನು ಬಯಸದೇ ಇಡೀ ಸಮಾಜವನ್ನು ಮೋಕ್ಷದ ಕಡೆಗೆ ಕರೆದೊಯ್ಯುವ ಪ್ರಯತ್ನವನ್ನು ಮಾಡಿದ್ದಾರೆ. ದಾಸರೆಲ್ಲರೂ ತಮ್ಮ ಇ಼ಷ್ಟದೇವರ ಅಂಕಿತದಿAದ ತಮ್ಮ ಕೀರ್ತನೆಗಳನ್ನು ರಚಿಸಿ, ಪ್ರತಿಯೊಬ್ಬ ಮನುಷ್ಯನಿಗೆ ದೇವರಲ್ಲಿ ನಂಬಿಕೆ ಇರಬೇಕು ಎಂದು ಸಾರಿ ಸಾರಿ ಹೇಳಿದರು. ಇವರ ಕೀರ್ತನೆಗಳಲ್ಲಿ ಹೆಚ್ಚಾಗಿ ಶ್ರೀ ಹರಿಯ ಸ್ತುತಿಗಳನ್ನು ನಾವು ಕಾಣಬಹುದಾಗಿದೆ. ಹರಿದಾಸ ಸಾಹಿತ್ಯದಲ್ಲಿ ಕೆಲವು ಮಹಿಳಾ ಹರಿದಾಸರು ನಕ್ಷತ್ರಗಳಂತೆ ಮಿಂಚಿದ್ದಾರೆ. ಇವರಲ್ಲಿ ಹೆಳವನಕಟ್ಟೆ ಗಿರಿಯಮ್ಮನ ಪಾತ್ರ ಪ್ರಮುಖವಾದುದು. ಅಂತಹ ಮಹಿಳಾ ಕೀರ್ತನಕಾರರಲ್ಲಿ ಹೆಳವನಕಟ್ಟೆ ಗಿರಿಯಮ್ಮನವರು ತಮ್ಮ ಅಮೂಲ್ಯವಾದ ಕೃತಿಗಳನ್ನು ರಚಿಸಿ ಬಹು ಎತ್ತರದ ಸ್ಥಾನಕ್ಕೇರಿದವರು.
Copyright (c) 2024 ಮುಕ್ತಾ ಪೈ

This work is licensed under a Creative Commons Attribution-ShareAlike 4.0 International License.